ಡಿಸೆಂಬರ್ 22 ಯಾವ ದಿನ ? ತಪ್ಪದೇ ಓದಿ
ಅರ್ಥವಿಲ್ಲದ , ಎಷ್ಟೋ ದಿನಗಳ ಮಧ್ಯೆ ಒಬ್ಬ ಪ್ರತಿಭಾವಂತನ ದಿನ
ಡಿಸೆಂಬರ್ 22 ಯಾವ ದಿನ ?
ಭಾರತೀಯ ಖ್ಯಾತ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ರವರ ಹುಟ್ಟಿದ ದಿನವನ್ನು ಭಾರತದಲ್ಲಿ ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಲಾಗುತ್ತದೆ.
ಡಿಸೆಂಬರ್ 22 ,ತೆಮಿಳುನಾಡಿನ ಕಡೂರಿನಲ್ಲಿ ಬ್ರಾಹ್ಮಣ ಅಯ್ಯಂಗಾರ್ ಸಂಪ್ರದಾಯದ ಕುಟುಂಬದಲ್ಲಿ ,1887 ರಲ್ಲಿ ಜನಿಸಿದರು.ಶಾಲೆಯ ದಿನದಿಂದಲೇ , ಅದ್ಭುತ ಗಣಿತದ ಜ್ಞಾನ ಹೊಂದಿದ್ದರು.ಗಣಿತದಲ್ಲಿ ಮಹಾನ್ ಸಾಧನೆ ಮಾಡಿದ್ದರು.ಭಾರತದ ಗಣಿತದ ವಿಷಯದಲ್ಲಿ ಹೆಮ್ಮೆಯ ಪುತ್ರ ಆಗಿದ್ದರು.ಇವರ ಕೊಡುಗೆ ಇಂದು ಕೂಡ ಪ್ರಸ್ತುತ ಆಗಿದೆ.
ಶ್ರೀನಿವಾಸ ರಾಮಾನುಜನ್ 11 ನೇ ವಯಸ್ಸಿಗೆ ಕಾಲೇಜಿನ ಗಣಿತದಲ್ಲಿ ಪರಿಣಿತಿ ಗಳಿಸಿದ್ದರು.13 ನೇ ವಯಸ್ಸಿನಲ್ಲಿ , ಗಣಿತದಲ್ಲಿ ಶ್ರೀನಿವಾಸ ರಾಮಾನುಜನ್ ಮಾಸ್ಟರ್ ಆಗಿದ್ದರು.
ಶ್ರೀನಿವಾಸ ರಾಮಾನುಜನ್ ಇಂಗ್ಲಿಷಿನಲ್ಲಿ ಗಣಿತಕ್ಕೆ ಸಂಬಂಧ ಪಟ್ಟ ಹಾಗೆ ,ಹಲವು ಪತ್ರಗಳನ್ನು ಇಂಗ್ಲಿಷ್ ಗಣಿತಜ್ಞರಿಗೆ ಬರೆದರು.ಆದರೆ ಆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರುಗಳು , ಓದದೇ ವಾಪಸ್ ಕಳುಹಿಸಿದ್ದರು.
ಈ ಮಹಾನ್ ಗಣಿತಜ್ಞ ತನ್ನ ಜೀವನದುದ್ದಕ್ಕೂ ,ಬಡತನ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದರು.1920 ರಲ್ಲಿ ,ವಿಶ್ವವು ಈ ಶ್ರೇಷ್ಠ ಗಣಿತಜ್ಞರನ್ನು ಕಳೆದುಕೊಂಡಿತು.ಆಗ ಇವರಿಗೆ 32 ವರ್ಷ ವಯಸ್ಸಾಗಿತ್ತು.ಅಪಾರ ಜ್ಞಾನ ಸಂಪತ್ತು ಇವರ ಬಳಿ ಇದ್ದರೂ, ಬಡತನದಿಂದ ಹೊರಬರಲಾಗದೆ , ಅನಾರೋಗ್ಯದಿಂದ ನಿಧನ ಆದರೂ ,ಅವರು ಗಣಿತದಲ್ಲಿ ಮಾಡಿದ ಅಪ್ರತಿಮ ಸಾಧನೆಯನ್ನು ಗುರುತಿಸಿ ,ಭಾರತ ಸರ್ಕಾರ ಡಿಸೆಂಬರ್ 22 ರಂದು ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಲಾಗುತ್ತಿದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
sathishparthivasa@gmail.com