ಮರೆಯಲಾಗದ ನೆನಪು - ಕುವೆಂಪು
ಕುವೆಂಪು ಮರೆಯಲಾಗದ ನೆನಪು
ದೇಶ ಕಂಡ ಮಹಾನ್ ಸಾಹಿತಿ ನಮ್ಮ ಪುಟ್ಟಪ್ಪ . ಇಂದು ಅವರ ಜನ್ಮದಿನ . ನಮ್ಮ ರಾಜ್ಯಗೀತೆ 'ಭಾರತ ಜನನಿಯ ತನುಜಾತೆ ,ಜಯಯೇ ಕರ್ನಾಟಕ ಮಾತೆ 'ಎಂದು ಇಡೀ ವಿಶ್ವಕ್ಕೆ ಸಾರಿದ ಮಹಾನ್ ಲೇಖಕನ ಹುಟ್ಟು ಹಬ್ಬ
ಕುವೆಂಪು ಜನನ
ಕುವೆಂಪು 1904 ಡಿಸೆಂಬರ್ 29 ರಂದು ಹಿರೇಕೂಡಿಕೆ,ಕೊಪ್ಪ ತಾಲ್ಲೂಕು , ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನಿಸಿದರು.
ವೃತ್ತಿ
ಕುವೆಂಪುರವರು , ಪ್ರಾಧ್ಯಾಪಕ, ಪ್ರಾಂಶುಪಾಲ, ಕುಲಪತಿಯಾಗಿ ಸೇವೆ ಸಲ್ಲಿಸಿದ್ದಾರೆ.ಕವಿಯಾಗಿ ಮತ್ತು ಲೇಖಕರಾಗಿ ಜಗತ್ ಪ್ರಸಿದ್ಧಿ ಆಗಿದ್ದಾರೆ.
ಸಾಹಿತ್ಯ ಕೃಷಿ
ಇವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯ , ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ ಕುವೆಂಪು ಅವರ ಸಾಮರ್ಥ್ಯವನ್ನು ಮತ್ತು ಅವರ ಸಾಹಿತ್ಯ ಕೃಷಿಯನ್ನು ವಿಶ್ವಕ್ಕೆ ತೋರಿಸುತ್ತದೆ.
ಚಿತ್ರಾಂಗದಾ , ಕೊಳಲು , ಪಾಂಚಜನ್ಯ , ನವಿಲು ,ಕಲಾ ಸುಂದರಿ , ಪ್ರೇಮ ಕಾಶ್ಮೀರ , ಅಗ್ನಿ ಹಂಸ , ಮಂತ್ರಾಕ್ಷತೆ ಹೀಗೆ ಹಲವಾರು ಕವನ ಸಂಕಲನಗಳು , ಕಥೆಗಳನ್ನು ಬರೆದಿದ್ದಾರೆ
ಸಾಂಸಾರಿಕ ಜೀವನ
ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪನವರು , ಹೇಮಾವತಿ ಎನ್ನುವರನ್ನು ವಿವಾಹ ಆದರು.ಇವರ ಮಗ ಪೂರ್ಣ ಚಂದ್ರ ತೇಜಸ್ವಿ ಮಹಾನ್ ಲೇಖಕರಾಗಿದ್ದರು.
ಮರೆಯಲಾಗದ ನೆನಪು , ಕುವೆಂಪು
ಮಲೆನಾಡಿನ ಕಂಪು,ಕೋಗಿಲೆಗಳ ಇಂಪು
ಮಹಾನ್ ಕವಿಯ ಸಾವಿಲ್ಲದ ಸಾಹಿತ್ಯಕ್ಕೆ ಹುಟ್ಟು ಹಬ್ಬದ ಶುಭಾಶಯಗಳು
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
sathishparthivasa@gmail.com