ಅಫ್ಘಾನಿಸ್ತಾನ್ ಸಂಸತ್ ಸದಸ್ಯನ ಮೇಲೆ ದಾಳಿ
ಭಯೋತ್ಪಾದನೆ ಈ ಯುಗದ ಅತಿ ದೊಡ್ಡ ಶಾಪ... ಇದಕ್ಕೆ ಬಲಿಯಾದವರೆಷ್ಟೂ ಅಮಾಯಕ ಜನರು ,ಈ ಮುಗ್ಧ ಜನರ ಮಾರಣಹೋಮಕ್ಕೆ ಕೆಲವು ಸಿದ್ದಾಂತಗಳು ಮತ್ತು ಕಾರಣಗಳು ಸಮರ್ಥನೀಯವಲ್ಲ.ಸಾವು ನೋವಿಗೆ ಯಾವುದೇ ದೇಶ ಇಲ್ಲ , ಯಾವುದೇ ಧರ್ಮ ಇಲ್ಲ.ಹಿಂಸೆ ಮತ್ತು ನೋವು ಎಲ್ಲರಿಗೂ ಹಿಂಸೆ ಮತ್ತು ನೋವೇ ಎಂದು ಮನುಷ್ಯ ಮರೆಯುತ್ತಿದ್ದಾನೆ.
ಏನಾಯ್ತು ಅಫ್ಘಾನಿಸ್ತಾನದಲ್ಲಿ
ತಾಲಿಬಾನ್ ಮತ್ತು ಸರ್ಕಾರದ ನಡುವೆ ಯಾವಾಗಲೂ ಸಂಘರ್ಷ ನಡೆಯುತ್ತಲೇ ಇರುತ್ತವೆ.ಕದನ ವಿರಾಮದ ಬಗ್ಗೆ ಅಧ್ಯಕ್ಷ ಅಶ್ರಫ್ ಘನಿ ಮಾತುಕತೆಗೆ ಮುಂದಾಗಿದ್ದರು.ಮಾತುಕತೆಗೆ ಬರಲು ಆಹ್ವಾನ ನೀಡಿದ್ದರು.ಆದರೆ ಹಿಂಸೆಯ ಮೂಲಕ ಇದಕ್ಕೆ ಅಹಂಕಾರ ತೋರಿಸಿದ್ದಾರೆ.ಅಧ್ಯಕ್ಷರು ಮತ್ತೊಮ್ಮೆ ತಾಲೀಬಾನ್ ಗೆ " ನಾಗರೀಕರ ಮೇಲಿನ ದೌರ್ಜನ್ಯ ನಿಲ್ಲಿಸಬೇಕು ಮತ್ತು ಕದನ ವಿರಾಮವನ್ನು ಒಪ್ಪಿಕೊಳ್ಳಬೇಕು" ಎಂದು ಕರೆ ನೀಡಿದರು. ಈ ದಾಳಿಯಲ್ಲಿ ಸಂಸದ್ ಸದಸ್ಯ 'ಖಾನ್ ಮೊಹಮ್ಮದ್ ವರ್ದಕ್ ' ಸೇರಿದಂತೆ ಸುಮಾರು 20 ನಾಗರೀಕರು ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವ ಮಸೂದ್ ಅಂಡರಾಬಿ ತಿಳಿಸಿದ್ದಾರೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
sathishparthivasa@gmail.com