ಶ್ರೀನಗರ ಲೇಹ್ ಹೆದ್ದಾರಿ ಮುಕ್ತ ಮುಕ್ತ
ಹಿಮಪಾತದ ಕಡಿಮೆ ಹಿನ್ನೆಲೆಯಲ್ಲಿ,
ಶ್ರೀನಗರ ಲೇಹ್ ಹೆದ್ದಾರಿ ಮುಕ್ತ ಮುಕ್ತ
ಭಾರೀ ಹಿಮಪಾತ ಮತ್ತು ಎತ್ತರದ ಜೋಜಿಲಾ ಮೇಲ್ಭಾಗದಲ್ಲಿ ಜಾರುವ ರಸ್ತೆಯಿಂದಾಗಿ , ಒಂದು ವಾರದಿಂದ ಮುಚ್ಚಿದ್ದ , ಶ್ರೀನಗರ ಲೇಹ್ ಹೆದ್ದಾರಿಯನ್ನು ಮಂಗಳವಾರದಿಂದ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹರ್ಷ ವ್ಯಕ್ತಪಡಿಸಿದ ಜನತೆ
ಶ್ರೀನಗರದಿಂದ ಲಡಾಖ್ ರವರೆಗೆ ಸಂಚಾರಕ್ಕೆ ಅನುಕೂಲ ಕಲ್ಪಿಸಿರುವುದರಿಂದ , ನಾಗರೀಕರು ಮತ್ತು ಭದ್ರತಾ ಸಿಬ್ಬಂದಿಗಳಿಗೆ ತುಂಬಾ ಅನುಕೂಲವಾಗಿದೆ.ಸುರಕ್ಷತೆಯ ದೃಷ್ಟಿಯಿಂದ ,ಮಧ್ಯಾಹ್ನದಿಂದ ಪರಿಸ್ಥಿತಿ ಅವಲೋಕಿಸಿ ,11500 ಅಡಿ ಎತ್ತರದಲ್ಲಿ , ಹಿಮದಿಂದ ಆವೃತವಾದ ಜೊಜಿಲಾ ಮೇಲ್ಭಾಗವನ್ನು ದಾಟಲು ಅವಕಾಶ ನೀಡಲಾಗಿದೆ .
ವಾಹನಗಳು ಇಲ್ಲಿ ಚಲಿಸುವುದು ಅತ್ಯಂತ ಸಾಹಸಮಯ ವಾಗಿರುವುದರಿಂದ , ತುರ್ತು ಸಮಯದಲ್ಲಿ ಸಹಾಯ ಮಾಡಲು ಪುರುಷರು ಮತ್ತು ಯಂತ್ರೋಪಕರಣಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೈದ್ಯಕೀಯ ಸಿಬ್ಬಂದಿ
ಯಾವುದೇ ಅಹಿತಕರ ಸನ್ನಿವೇಶಗಳು ಸಂಭವಿಸಿದರೆ , ಸಮರ್ಥವಾಗಿ ಎದುರಿಸಲು , ಭದ್ರತಾ ಸಿಬ್ಬಂದಿ , ಅಗತ್ಯ ವೈದ್ಯಕೀಯ ಸಿಬ್ಬಂದಿ ಮತ್ತು ವೈದ್ಯಕೀಯ ಉಪಕರಣಗಳನ್ನು ಸಜ್ಜುಗೊಳಿಸುತ್ತಿದೆ.
ರಸ್ತೆಯನ್ನು ನೋಡಿಕೊಳ್ಳುತ್ತಿರುವ , ಬಾರ್ಡರ್ ರೋಡ್ಸ್ ಆರ್ಗನೈಜೇಷನ್ , ಲಡಾಖ್ ಗೆ ಅಗತ್ಯ ಸಾಮಾಗ್ರಿಗಳನ್ನು ,ಸಾಗಿಸುವ ವಾಹನಗಳು ,ಹಗಲಿನ ವೇಳೆಯಲ್ಲಿ,ಜೊಜಿಲಾ ಮೇಲ್ಭಾಗವನ್ನು ದಾಟಿದೆ ಎಂದು ಹೇಳಿದ್ದಾರೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
sathishparthivasa@gmail.com