ಗಣರಾಜ್ಯೋತ್ಸವದ ಅಂಗವಾಗಿ ಭಾರತಕ್ಕೆ ಭೇಟಿ ನೀಡದಂತೆ ಪತ್ರ
ಗಣರಾಜ್ಯೋತ್ಸವದ ಅಂಗವಾಗಿ ಭಾರತಕ್ಕೆ ಭೇಟಿ ನೀಡದಂತೆ ಪತ್ರ
ಬ್ರಿಟನ್ ಪ್ರಧಾನಿಗೆ ಪತ್ರ
ಮುಂದಿನ ತಿಂಗಳು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರತಿಭಟನೆಯ ಸಂಕೇತವಾಗಿ , ಭಾಗವಹಿಸದಂತೆ ಬ್ರಿಟನ್ ಪ್ರಧಾನಿ ಮತ್ತು ಬ್ರಿಟಿಷ್ ಶಾಸಕರನ್ನು ಪತ್ರದ ಮೂಲಕ ಕೋರುವುದಾಗಿ ,ಪ್ರತಿಭಟನಾ ಕೃಷಿ ಸಂಘಟನೆಗಳು ತಿಳಿಸಿದೆ.ಇದರ ಬಗ್ಗೆ ಮಾಹಿತಿ ನೀಡಿದ , ಹಿರಿಯ ಕೃಷಿ ಒಕ್ಕೂಟದ ಮುಖಂಡ ಕುಲ್ವಂತ್ ಸಿಂಗ್ ಮಾತನಾಡಿ ' ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ , ಸುಮಾರು 450 ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ, ಮಾತನಾಡಿ ಒಂದು ಸಮಿತಿಯನ್ನು ರಚಿಸಿದೆ.ಈ ಸಮಿತಿಯು ಸರ್ಕಾರದ ಜೊತೆ ಮಾತುಕತೆ ನಡೆಸಲಿದೆ.
2 ಕೋಟಿ ಪತ್ರದೊಂದಿಗೆ ರಾಷ್ಟ್ರಪತಿಗಳಿಗೆ ಮನವಿ
2 ಕೋಟಿ ಜನರು ಈ ಕೃಷಿ ಮಸೂದೆ ವಿರೋಧಿಸಿ ,ಸಹಿ ಮಾಡಿರುವ ಪತ್ರವನ್ನು ಕಾಂಗ್ರೆಸ್ ನಾಯಕರ ಜೊತೆ ರಾಹುಲ್ ಗಾಂಧಿ ರಾಷ್ಟ್ರಪತಿಗಳಿಗೆ ಸಲ್ಲಿಸಿದರು.ಈ ಕೃಷಿ ಮಸೂದೆಗಳು ಕಾರ್ಪೋರೇಟ್ ಮಸೂದೆಗಳು ಆಗಿದ್ದು , ರೈತರು ಮುಂದಿನ ದಿನಗಳಲ್ಲಿ ತುಂಬಾ ಸಂಕಷ್ಟಗಳನ್ನು ಅನುಭವಿಸಬೇಕಾಗಬಹುದು.ಹಾಗಾಗಿ ಜನ ವಿರೋಧಿ ಮಸೂದೆಗಳು ಜಾರಿಗೆ ಬರದಂತೆ ತಡೆಯಬೇಕು ಎಂದು ರಾಷ್ಟ್ರಪತಿಗಳಲ್ಲಿ ಮನವಿ ಮಾಡಿದರು
ತಪ್ಪು ದಾರಿಗೆ ಎಳೆಯುವ ಯತ್ನ
ರೈತರು ಈಗಿರುವ ವ್ಯವಸ್ಥೆಯಲ್ಲಿ ಸಂತೋಷವಾಗಿದ್ದರೆ , ಆತ್ಮಹತ್ಯೆ ಅಂತಹ ಪ್ರಕರಣಗಳು ಏಕೆ ಹೆಚ್ಚಾಗುತ್ತಿದೆ.ಮತ್ತು ರೈತರು ಬಡವರಾಗುತ್ತಿದ್ದಾರೆ.ದಲ್ಲಾಳಿಗಳು ಶ್ರೀಮಂತರಾಗುತ್ತಿದ್ದಾರೆ ಎಲ್ಲಾ ಗೊತ್ತಿದ್ದರೂ, ಕಾಂಗ್ರೆಸ್ ರಾಜಕೀಯವಾಗಿ ಇದನ್ನು ವಿರೋಧಿಸಿ ,ಜನರ ದಾರಿ ತಪ್ಪಿಸುತ್ತಿದೆ ಎಂದು ಬಿಜೆಪಿ ಪ್ರಕಟನೆಯಲ್ಲಿ ಆರೋಪಿಸಿದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
sathishparthivasa@gmail.com