ಗುರುವಾರ ೪ ಡಿಸೆಂಬರ್ ೨೦೦೮

ಮುತ್ತಿನೊಳಗಿನ ಬಿಂದು

ಸಾಗರದ ಒಳಗಿಂದ ನೇಸರನ ಪ್ರತಿಬಿಂಬ
ಕೆಂಪೆಲ್ಲ ಚೆಲ್ಲಿಹುದು ಪ್ರಕೃತಿಯ ಎದೆ ತುಂಬಾ
ಮಿಂದೆ ಮಾತಾ ಮಿಂದೆ ನಿನ್ನ ಎದೆಯಾಳದಲಿ
ಮಿಂದೆ ಕಂಡೆ ಮಾತಾ ಕಂಡೆ ,ನಿನ್ನ ಅಂತರಂಗವ ಕಂಡೆ

ಟೊಂಗೆಗಳ ನಡುವಿಂದ ಹಕ್ಕಿಗಳ ಝೇಂಕಾರ
ಸಂಗೀತ ಅಲೆಯಲಿ ಸಪ್ತ ನಾದಗಳ ಸಾಕಾರ
ಮಿಂದೆ ಮಾತಾ ಮಿಂದೆ ನಿನ್ನ ಎದೆಯಾಳದಲಿ ಮಿಂದೆ
ಕಂಡೆ ಮಾತಾ ಕಂಡೆ ,ನಿನ್ನ ಅಂತರಂಗವ ಕಂಡೆ

ಗಿರಿಯ ಮೇಲಿಂದ ಜಲಧಾರೆಯ ಜಲಕಾರ
ಚಿಮ್ಮುತ್ತಿರೊ ಚಿಲುಮೆಯಲಿ ಕೆಂಪು ಭಾಸ್ಕರನ ಸಿಂಗಾರ
ಮಿಂದೆ ಮಾತಾ ಮಿಂದೆ ನಿನ್ನ ಎದೆಯಾಳದಲಿ ಮಿಂದೆ
ಕಂಡೆ ಮಾತಾ ಕಂಡೆ ,ನಿನ್ನ ಅಂತರಂಗವ ಕಂಡೆ


ತುಂತುರು ಮಳೆಯಿಂದ ತನ್ಮನ ತಂಪಾಗಿ
ಭುವಿಯೆಲ್ಲ ಕೆಂಪಾಗಿ ನಿನ್ನೊಳಗೆ ನಾನಾಗಿ
ಧನ್ಯ ತಾಯಿ ಧನ್ಯ ನನ್ನ ಅಂತರಾತ್ಮವು ಧನ್ಯ
ನಿತ್ಯ ತಾಯಿ ನಿತ್ಯ ನಿನ್ನ ಸಿರಿ ಬಾಳಿಗೆ ನಿತ್ಯ

ಲೇಖಕರು :ಚಾಣಾಕ್ಷ

ಕನ್ನಡಾಂಬೆ

ಬಾ ತಾಯಿ ಬಾ ಮಾಯಿ ಧರೆಗಿಳಿದು ಬಾರೆ
ಕರುನಾಡು ಸಿರಿ ದೇವಿ ಕನ್ನಡಿಗನೊಮ್ಮೆ ನೋಡೆ
ಎಲ್ಲೆಲ್ಲಿ ಕಂಡ ಕಡೆಯಲ್ಲಿ ಅಂದು ,ಕನ್ನಡದ ಬಾವುಟ
ಗಲ್ಲಿಗಲ್ಲಿಯಲಿ ಹಳ್ಳಿ ಹಳ್ಳಿಯಲಿ ,ಕನ್ನಡಿಗನ ಅರ್ಭಟ
ಹುಡುಕಿದರು ಸಿಗದು ಇಂದು ,ಕನ್ನಡಿಗನ ಭೂಪಟ
ಕಡೆ ನೋಡು ತಾಯಿ , ಯಾವ ಯಾವ ಕಡೆ ನಿನ್ನ ಮಕ್ಕಳ ಕೂಟ
ಅತ್ತ ಇತ್ತ ಎತ್ತ ನೋಡಿದರತ್ತ ಕನ್ನಡಿಗನ ಸಾಹಸ
ಬಗಿದು ಸಿಗಿದು ಮೆಟ್ಟಿ ಮೆರೆದ ಕನ್ನಡಿಗನೇ ಅರಸ
ಮುತ್ತಿನಂತೆ ಹೊಳೆವ ಲಿಪಿ ,ಜೇನಿನಂತೆ ಸವಿಯ ನುಡಿ ಕನ್ನಡವು ನವರಸ
ಮನ ಮನದ ಪ್ರೇಮದ ವನದಲಿ ಇಂದು ಕನ್ನಡವು ವಿಷ
ಗುಡಿ ಗೊಪುರದ ಕೆತ್ತನೆಯಲಿ ಕನ್ನಡ ಸಂಸ್ಕ್ರತಿ ಅರಳಿಸಿ
ಸಾಹಿತ್ಯ ಕ್ರಾಂತಿಯಲಿ ಕನ್ನಡವ ಉನ್ನತಕ್ಕೇರಿಸಿ
ಗಂದದ ಕನ್ನಡವ ವಿಶ್ವಕ್ಕೆ ಪರಿಚಯಿಸಿ
ಮೆರೆದ ಕನ್ನಡಿಗ ಮಕ್ಕಳಿಗೆ ಕನ್ನಡ ತಾತ್ಸರವೇ?
ಸಾವು ನೋವು ಬೇನೆಯಲಿ ಕನ್ನಡತಿಯು ಬಳಲಿ
ತಾಯ ಅಳಿವು ಉಳಿವು ಕನ್ನಡಿಗನ ಕರದಲಿ
ನಾಡ ಸಂಸ್ಕ್ರತಿಯ ದೀಪ ಜಗದಲಿ ಬೆಳಗಲಿ
ಕನ್ನಡವು ಕನ್ನಡಿಗನ ಎದೆಯಲಿ ಒಣಗದ ಹಸಿರಾಗಲಿ
ಲೇಖಕ: ಚಾಣಾಕ್ಷ

ಮನದ ಹಣತೆ

ಪಾಡ್ಯದಸಂಜೆಯಳೋ
ತಂಪಾದ ಮುಸುಕಿನಲಿ
ಹತ್ತಿಸು ದೀಪ ಹೃದಯ ಮಂದಿರ ದಲಿ
ಚೆಲ್ಲುತ್ತಾ ಉಷೆಯು
ಕರಗಿತು ನಿಶೆಯು
ಆರದೆ ಉರಿಯಲಿ ಕಾಣುತ ಬೆಳಗಲಿ
ಹಾದಿಯಲಿ ಮುಳ್ಳುಗಳು ಬೀದಿಯಲಿ ಕಲ್ಲುಗಳು


ಬೆಳಕು ಚಿಮ್ಮಿದೊಡೆ
ಅಜ್ಞಾನ ಇರದು ಜಗದೊಳು
ಶಾಂತಿ ವನವ ಬೆಳಸಿ ಪ್ರೇಮ ಯುಗಕೆ ಹರಡಿ
ಸುಥೆಯ ಹರಿಸಿದೊಡೆ
ಅಂಥಕಾರವೆ ಇರದು ಈ ಭುವಿಯಲಿ
ಪ್ರಕೃತಿಯ ಮಡಿಲಲ್ಲಿ
ಶಶಿ ಶಿಶು ವಾದರು
ಪ್ರೀತಿ ಮನದಲ್ಲಿ ಪಶುವಾಗದಿರಲಿ
ಎಲೆಯ ಮೇಲೊಂದು ಹನಿಯು ನೀನಾಗಿ
ಕಿರಣವು ಸ್ವರ್ಶಿಸಿದೊಡೆ
ಮನವು ಮುತ್ತಾಗಲಿ ಮುತ್ತು ಚಿರವಾಗಲಿ
ತೈಲದ ಹಣತೆ
ಬದುಕಿನ ಮಮತೆ
ದೀಪದ ಸಾರ್ಥಕತೆಯಲಿ ಜೀವ ಜ್ಯೋತಿಯಾಗಲಿ

ದೀಪಾವಳಿ ಬಾಳ ಚೇತನವಾಗಲಿ
ಅದು ನಮ್ಮೆಲ್ಲರ ಉಸಿರಾಗಲಿ
ಲೇಖಕ:ಚಾಣಾಕ್ಷ

ಸೋಮವಾರ ೧ ಡಿಸೆಂಬರ್ ೨೦೦೮

ನನ್ನ ಪ್ರಶ್ನೆಗೆ ನನ್ನದೇ ಉತ್ತರ

ನಾವು ಯಾರು ? ನಾವು ಏಕೆ ಇಲ್ಲಿದ್ದೇವೆ ?ನಮ್ಮಲ್ಲಿ ಏಕೆ ಜೀವವಿದೆ ? ಸಾವು ಎಂದರೇನು ? ಜೀವ ಇರುವಾಗ ಕ್ರಿಯಾ ಶೀಲಾವಾಗಿರುವ ಜೀವಿಗಳು , ಜೀವ ಹೋದಾಗಏಕೆ ನಿರ್ಜೀವ ವಾಗುತ್ತದೆ.? ಈ ಜೀವ ಎಲ್ಲಿಂದ ಬರುತ್ತದೆ ? ಎಲ್ಲಿಗೆ ಹೋಗುತ್ತದೆ ? ಏಕೆ ಹೋಗುತ್ತದೆ ?ಜೀವ ಇರುವಾಗ ಸ್ವಲ್ಪ ಬೆಂಕಿ ತಾಗಿದರೋ ನೋವಾಗುವ ಜೀವಿಗಳಿಗೆ ಸತ್ತ ಮೇಲೆ ಬೆಂಕಿ ಯಲ್ಲಿ ಹಾಕಿದರು ನೋವು ಹಾಗುವುದಿಲ್ಲ ಏಕೆ ? ಗಾಳಿ ಏಕೆ ಇದೆ ? ನೀರು ಏಕೆ ಇದೆ ? ಮೋದ ಕರಗಿ ಮಳೆ ಏಕೆ ಬರುತ್ತದೆ ? ವಿಸ್ಮಯ ಜಗತ್ತು ಏಕೆ ನಿಗೂದವಾಗಿದೆ ? ದೇವರು ಎಂದರೇನು ? ದೇವರೆನ್ನುವುದು ಇದೆಯಾ ಇಲ್ಲವಾ ? ದೇವರು ಇದೆ ಅನ್ನುವುದಾದರೆ ಏಕೆ ಕಾಣಿಸುವುದಿಲ್ಲ .? ಏಕೆ ಜೀವಿಗಳ ಜೊತೆ ಬೆರೆಯುವುದಿಲ್ಲ ? ದೇವರು ಮಾನವನ ಸೃಷ್ಟಿಯೆ ? ಮಾನವನ ಸೃಷ್ಟಿ ದೇವರೇ ? ದೇವರು ಇಲ್ಲ ಅನ್ನುವುದಾದರೆ ಇಡೀ ವಿಶ್ವ ವನ್ನು ನಿಯಂತ್ರಿಸುವರು ಯಾರು ? ದೇವರೆಂದರೆ ರಾಮ ಕೃಷ್ಣಾನೆ ? ಅಲ್ಲಾ , ಏಸುವೆ ? ಬುದ್ಧ ಜೀನ ನೇ ? ಯಾರು ದೇವರು ? ಇವರೆಲ್ಲಾ ದೇವರೇ ?ದೇವರೆಲ್ಲ ಎಂದರೆ ಏಕೆ ಪೂಜಿಸುತಾರೆ ? ಏಕೆ ಆರಾದಿಸುತ್ತಾರೆ ?ಇವರೆಲ್ಲ ಮೂಡರೆ ?ದೇವರ ಕಲ್ಪನೆ ಮಾನವರಲ್ಲಿ ಮಾತ್ರ ವಿದೆಯಾ ? ಇತರ ಜೀವಿಗಳ್ಳೋ ದೇವರ ಕಲ್ಪನೆ ಇದೆಯಾ ? ಅದು ಇದ್ದರೇ ಯಾವ ಸ್ವರೂಪದಲ್ಲಿದೆ ? ಮಾನವರೇಕೆ ಇತರ ಜೀವಿಗಳಿಗಿಂತ ಬುದ್ದಿವಂತರು ? ಈ ಬುದ್ದೀ ಕೊಟ್ಟವರು ಯಾರು ? ಈ ಪ್ರಶ್ನೆ ಗಳಿಗೆ ನನ್ನ ಮೂಗಿನ ನೇರಕ್ಕೇ ಉತ್ತರವನ್ನು ಹುಡುಕುವ ಸಣ್ಣ ಪ್ರಯತ್ನ ಮಾಡಿದ್ದೀನಿ

ದೇವರು ಇದ್ದಾನೆಯೇ ಎಂದು ತಿಳಿದುಕೊಳ್ಳುವ ಮೊದಲು ಇತಿಹಾಸದ ಕಡೆ ನೋಡೋಣ . ಪ್ರಕೃತಿಯಲ್ಲಿ ಸಂಭವಿಸುತ್ತಿದ್ದ ಗುಡುಗು ಮಿಂಜೂಗಳನ್ನು ಕಂಡ ಆದಿಮಾನವ ಅವುಗಳ ಬಗ್ಗೆ ಯೋಚಿಸತೊಡಗಿದ .ಅವನ ಯೋಚನಾ ಲಹರಿ ಸೀಮಿತವಾಗಿದ್ದರಿಂದ ಭಯಭೀತನಾದ . ಅವನು ಇವುಗಳ್ಳನ್ನು ಎದುರಿಸುವ ಸಲುವಾಗಿ ಪ್ರಾಧಿಸತೊಡಗಿರಬಹುದು .ನಂತರ ಮಾನವ ಸಂಘಟಿತರಾಗುತ್ತಾ ಹೋದಂತೆ ಪ್ರಕೃತಿಯ ವೈಶಿಷ್ಟ್ಯಗಳನ್ನು ಎದುರಿಸಲು ಅವನು ಕೆಲವು ಕಲ್ಲು ಗಳನ್ನು ಮರಗಳನ್ನು ಆಯ್ಕೆ ಮಾಡಿಕೊಂಡ .ಅವುಗಳನ್ನು ತನ್ನದೇ ಆದ ವಿಧಾನಗಳಿಂದ ಪೂಜಿಸುತ್ತಾ ಹೋದ. ಕಾಲ ಕಳೆದಂತೆ ,ಸಮಾಜ ಬದಲಾದಂತೆ ಆ ವಿಧಾನಗಳು ಬದಲಾಗುತ್ತಾ ಹೋದವು. ಒಂದು ಕಡೆ ನೆಲೆ ನಿಂತ ಮಾನವ ಮಾತು ಕಲಿತ . ತನ್ನ ಬಾವನೇ ಗಳನ್ನು ಹಂಚಿಕೊಳ್ಳಲು ಬರವಣಿಗೆಯ ಲಿಪಿ ಕಲಿತ. ಆಗ ತಾನು ನಂಬಿದ ಪ್ರೀತ್ರಾಚಿತ ನಂಬಿಕೆ ಗಳನ್ನು ಮುದ್ರಿಸ ತೊಡಗಿದ .ತಾನು ಅನುಭವಿಸಿದ ಘಟನೆಗಳನ್ನು ವಿವರಿಸ ತೊಡಗಿದ .ಸಮಾಜ ಬದಲಾಗುತ್ತಾ ಹೋದ ಹಾಗೆ ,ಆ ನಂಬಿಕೆಗಳು ಹಾಗೂ ಆಡು ಭಾಷೆಯು ತಲೆಮಾರಿನ ಕತೆಗಳು ವೈಭವಿಕರನಗೂಂಡು ಹಲವಾರು ಕತೆಗಳಾಗಿ ಒಬ್ಬ ವ್ಯಕ್ತಿ ಇಂದ ಇನ್ನೊಂದು ವ್ಯಕ್ತಿಗೆ ,ಒಂದು ತಲೆಮಾರಿನಿಂದ ಇನ್ನೊಂದುತಲೆಮಾರಿಗೆ ವೈಬವಿಕರಣ ವಾಗುತಲ್ಲೇ ಪ್ರಸಾರ ವಾಯಿತು.


ಹಾಗಾದರೆ ,ದೇವರು ಮಾನವನ ಸೃಷ್ಟಿಯೆ ? ಅಲ್ಲ ಅನ್ನುವುದಾದರೆ ದೇವರ ಸೃಷ್ಟಿ ಮಾನವನೇ ? ಎಂಬ ಪ್ರಶ್ನೆ ಗೆ ಉತ್ತರ ನಿಗೂಧ .ರಾಮ ಕೃಷ್ಣ ದೇವರೇ ? ರಾಮ ಒಬ್ಬ ಸತ್ಪೂರುಷ ಕೃಷ್ಣ ಒಬ್ಬ ಒಳ್ಳೇ ರಾಜಕಾರಣಿ ಆಗಿದ್ದರು .ಅವರ ಮೇಲಿರುವ ಕತೆಗಳನ್ನು ಮಾನವನೇ ಸೃಷ್ಟಿಸಿರಾ ಬೇಕು .ಏಕೆಂದರೆ ಎಲ್ಲ ದೇವರು ಮಾನವನೇ ಆಗಿದ್ದಾರೆ. ದೇವರನ್ನು ಮಾನವರ ರೂಪದಲ್ಲಿ ಕಂಡಿದ್ದಾರೆ. ನಂತರ ಕತೆಗಳು ವೈಬವಿ ಕಾರಣಗೊಂಡಂತೆ ಸಾಕು ಪ್ರಾಣಿಗಳು ಮತ್ತು ವೈಶಿಷ್ಟ್ಯ ಪ್ರಾಣಿಗಳ ರೂಪದಲ್ಲಿ ದೇವರನ್ನು ಕಾಣ ತೊಡಗಿದ .ದರ್ಮ ಎಂದರೇನು ?ಮನುಷ್ಯ ಹೀಗೆ ಬದುಕಬೇಕು , ಹೀಗೆಯೇ ಬಾಳ ಬೇಕು ಎಂಬುದರ ನಿಯಮ ಗ್ರಂಥ .ಮಾನವನು ಮಾಡುವ ತಪ್ಪು ಗಳನ್ನು ಸರಿ ದಾರಿಗೆ ತರುವ ಮತ್ತು ಶಾಂತಿ ನೆಲೆಸುವ ಉದ್ದೇಶಕ್ಕಾಗಿ ದರ್ಮದ ಮುಖಾಂತರ ಪಾಪ ಪ್ರಜ್ಞೆ ಉಂಟುಮಾಡಿ ಮಾನವನು ಹೀಗೆಯೇ ಬದುಕ ಬೇಕು ಎಂಬುದರ ತಿಳಿಸುವುದೇ ದರ್ಮ .ಅದಕ್ಕಾಗಿಯೇ ದೇವರು ಎಂಬುದರ ಕಲ್ಪನೆ ಮಾಡಿದರು.ಅಲ್ಲಾ,ಏಸು ,ಬುಧ್ಧ ಇವರೆಲ್ಲ ದೇವಸುತರು. ಅಂದರೆ ಒಬ್ಬ ವ್ಯಕ್ತಿಯಲಿ ಇರುವಂತಹ ಸಡ್ಗುಣ ಅಂಶಗಳು ಪ್ರಬಾವಿತವಾಗಿ ಆತನಲ್ಲಿ ದೇವರ ಗುಣ .ಅಂದರೆ ತಾನು ಅಂದುಕೊಂಡಿರುವ ಗುಣ ಆತನಲ್ಲಿ ಇರುವುದರಿಂದ ಅವನಲ್ಲಿ ದೇವರನ್ನು ಕಂಡಿರಾ ಬೇಕು. ಹಾಗಾದರೆ ದೇವರು ಇಲ್ಲವೇ ,ಇಲ್ಲ ಅನ್ನುವುದಾದರೆ ದೇವರು ಎಂಬ ಕಲ್ಪನೆ ಯ ಬಗ್ಗೆ ಯೋಚನೆ ಮಾಡೋಣ .ಮಾನವ ಮಾನವನ ನಡುವೆ ಸಂಪರ್ಕಗಳು ಇಲ್ಲದೇ ಇದ್ದ ಸಮಯದಲ್ಲಿಎಲ್ಲಾ ಆದಿವಾಸಿಗಳಲ್ಲೂ ಏಕರುಪಾ ವಾಗಿ,ವಿಶ್ವದ ಯಾವುದೇ ಮೂಲೆಯಲ್ಲಿ ನೋಡಿದರು ಮಾನವನ ಅಂತಾರಾಳದಲಿ ದೇವರು ಎಂಬ ಕಲ್ಪನೆ ಇದೆ .ಆದರೆ ವಿಧಾನಗಳಲ್ಲಿ , ಅಚರಣೆಗಳಲ್ಲಿ ವ್ಯಾತ್ಯಾಸ ವಿರಬಹುದು .ಆದರೆ ಯಾವುದು ಶಕ್ತಿ ಇದೆ ಎಂದು ಎಲ್ಲ ಮಾನವನ ಭಾವನೆ ಗಳಲ್ಲಿ ಭಾವನೆ ಗಳಲ್ಲಿ ಏಕರೂಪತೆ ಇದೆ. ಮಾನವ ಮುಂದೆ ಏನಾಗುತ್ತದೆ ಎಂದು ತಿಳಿಯುವ ಶಕ್ತಿ ಇದ್ದಿದ್ದರೆ ಅವನು ದೇವರ ಕಲ್ಪನೆಯೇ ಮಾಡುತ್ತಿರಲಿಲ್ಲ ಎಂಬುದು ನನ್ನ ಅನಿಸಿಕೆ .ಒಬ್ಬ ವ್ಯಕ್ತಿ ಈ ಜಗತ್ತಿಗೆ ಪ್ರವೇಶಿಸಿದಾಗ ತನ್ನ ಸುತ್ತಮುತ್ತಲ ಸಮಾಜವನ್ನು ನೋಡಿದಾಗ ಸಾಮನ್ಯವಾಗಿ ಯೋಚನೆ ಮಾಡುವುದು ಸತ್ತ . ವ್ಯಕ್ತಿ ಎಲ್ಲಿ ಹೋಗುತ್ತಾನೆ .ಈ ಜೀವ ಎಲ್ಲಿಗೆ ಹೋಗುತ್ತದೆ .?
ಏಕೆ ಹೋಗುತ್ತದೆ ಇದು ನಮ್ಮಲ್ಲಿಯೇ ಏಕೆ ಇರಬಾರದು .ಮುಂತಾದ ಪ್ರಶ್ನೆಗಳು ಕಾಡತೊಡಗುತ್ತದೆ. ಜೀವ ಇರುವಾಗ ನಮೆಲ್ಲರಾ ಜೊತೆ ಕ್ರಿಯಾಶೀಲನಾಗಿದ್ದು ,ಬೆಂಕಿ ತಗುಲಿದರೂ ನೋವಿನಿಂದ ಒಡ್ಡಾಡುವ ವ್ಯಕ್ತಿ ಸತ್ತ ಮೇಲೆ ಇಡೀ ದೇಹ ಬೆಂಕಿ ಯಲ್ಲಿ ಹಾಕಿದರು ಏನಾಗುವುದಿಲ್ಲ ಏಕೆ ಇಂತಹ ಹಲವಾರು ಪ್ರಶ್ನೆಗಳಿಗೆ ಉತ್ತರ ಸಿಗದ್ದಿದ್ದಾಗ ಯಾವುದೂ ಒಂದು ಶಕ್ತಿ ಇದೆ .ಎಂಬ ನಂಬಿಕೆ ಬಲವಾಗುತ್ತೆ . ನಾಸ್ತಿಕ ಅದವನು ದೇವರೆಂಬ ಕಲ್ಪನೆ ಸುಳ್ಳು .ಈ ಪ್ರಪಂಚದ ನಿಗೂದ ರಹಸ್ಯಗಳೆಲ್ಲ ಪ್ರಕೃತಿಯ ನಿಯಮ ಎನ್ನುತ್ತಾರೆ .ಈ ಪ್ರಕೃತಿಯ ನಿಯಮದ ರಚನಕಾರರು ಯಾರು .ಸೂತ್ರದಾರ ಯಾರು ?ಒಂದು ವಿಶಾಲವಾದ ನೋಟದಲ್ಲಿ ನೋಡುವದಾದರೋ ನಾಸ್ತಿಕರು ಕೂಡ ಯಾವುದೋ ಒಂದು ಶಕ್ತಿ ಇದೆಯೆಂದು ನಂಬುತ್ತಾರೆ .ಅದನ್ನು ಪ್ರಕೃತಿ ಎನ್ನುತ್ತಾರೆ .ಹಿಂದೂಗಳು ರಾಮ ಕೃಷ್ಣ ಎನ್ನುತ್ತಾರೆ. ಮುಸ್ಲಿಮ್ ಅಲ್ಲಾ , ಕ್ರಿಸ್ತರು ಏಸು ಎನ್ನುತ್ತಾರೆ .ನನ್ನ ಪ್ರಕಾರ ಯಾವೋದು ಒಂದು ಶಕ್ತಿ ನಮ್ಮೆಲ್ಲರ ಮೇಲೆ ಹಿಡಿತ ಹೊಂದಿದೆ .ಆದರೆ ಈಗಿರುವ ದೇವರುಗಳಲ್ಲಾ ಮಾನವನ ಸೃಷ್ಟಿಯೆ ಇರಬೇಕು .ನನ್ನ ಪ್ರಕಾರ ದೇವರು ಎಂದರೆ ಯಾವುದೋ ಅಗೋಚರ ಶಕ್ತಿ ,ಸನಾತನ ದರ್ಮ ವಾದ ಹಿಂದೂ ದರ್ಮದಲ್ಲಿ ದೇವರ ಅಮೂರ್ತ ಕಲ್ಪನೆಯ ಬಗ್ಗೆ ವೇದಗಳಲ್ಲಿ ಉಲ್ಲೇಖವಾಗಿದೆ.ಅಂದಿನ ಜ್ಞಾನಿಗಳು ,ಋಷಿಗಳು, ಅಂತರಂಗವಾಗಿ ದೇವರ ಸುಖವನ್ನು ಅನುಭವಿಸಿದ್ದಾರೆ. ಮಾನಸಿಕವಾಗಿ ಸಂತೋಷವನ್ನುಂಟು ಮಾಡುವ ಶಕ್ತಿಯೇ ದೇವರು ..ಆಚರಣೆಗಳು ,ಕಥೆಗಳು ,ನಂಬಿಕೆಗಳು ಮಾನವನ ಕೊಡುಗೆ ಎನ್ನಬಹುದು ಮಾನವ ಜಗತ್ತಿನ ರಹಸ್ಯಗಳ ಕಾರಣ ಏನೆಂದು ಹೇಳಬಹುದೇ ಹೊರತು ,ಏನ್ನನ್ನೂ ಸೃಷ್ಟಿಸಲು ಸಾದ್ಯವಿಲ್ಲ .ಈ ಸೃಷ್ಟಿ ಹಿಂದೆ ಒಬ್ಬ ಸೃಷ್ಟಿಕರ್ತ ಇರಬಹುದು ಎಂಬುದು ನನ್ನ ಅನಿಸಿಕೆ .ಅವನೆ ನನ್ನ ಪ್ರಕಾರ ದೇವರು

ಗುರುವಾರ ೮ ಮೆ ೨೦೦೮

gPowered: By the Power of Google...: Blogger adds bloggroll

gPowered: By the Power of Google...: Blogger adds bloggroll

ಬುಧವಾರ ೭ ಮೆ ೨೦೦೮





ಕುವೆಂಪು ನೀವೇ ನನಗೆ ....................ಚಿಲುಮೆಯ ಚೇತನ ಅದಕ್ಕೆ ನಾನು ಸಹ mr.chanaksha ಅಂತ ಕಾವ್ಯ ನಾಮ ಇಟ್ಟುಕೊಂಡಿದ್ದೇನೆ .ಕುವೆಂಪು =ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ mr.chanaksha ಅಂದರೆ.............................................? ಅರ್ಥವಿದೆ

ಮಂಗಳವಾರ ೬ ಮೆ ೨೦೦೮

ಕಾಣದ ನಿಜ ಕಾಣಿಸದ ಕಣಜ

ಕಾಣದ ನಿಜ ಕಾಣಿಸದ ಕಣಜ ಸಣ್ಣ ಕಥೆ ಲೇಖಕರು ಚಾಣಾಕ್ಷ ನಾನು ಬಸ್ಸಿನಿಂದ ಇಳಿಯುತ್ತಿದ್ದಂತೆ ಲಾಡ್ಜ್ ಮಾಡುವ ಗೊಡವೆಗೆ ಹೋಗಲಿಲ್ಲ ನೇರವಾಗಿ ಕೆಲಸಕ್ಕೆ ಹಾಜರಾದೆ. ಹೊಸ ಜಾಗ, ಹೊಸ ಆಫೀಸ್ ಎಲ್ಲವೂ ಹೊಸದೆ, ಹಳೆಯ ಆಫೀಸಿನಲ್ಲಿ ನಾನು ಹೆಚ್ಚು ಅಡ್ಜಸ್ಟ್ ಆಗಿದ್ದೆ ಅದು ಏಕೆ ವರ್ಗ ಮಾಡಿದರು ಈ ದೊಡ್ಡ ಬೆಂಗಳೂರಿಗೆ ನನಗಂತೂ ಅರ್ಥವಾಗಿರಲಿಲ್ಲ ಇನ್ನೇನು ಮಾಡುವುದಕ್ಕೆ ಆಗುತ್ತದೆ ,ನಾನೊಬ್ಬ ಸರ್ಕಾರಿ ನೌಕರ ಹೀಗಾಗಿ ಅವರು ಎಲ್ಲಿ ಹಾಕುತ್ತಾರೂ ಅಲ್ಲಿ ಹೋಗುವುದು

ನನ್ನ ಕರ್ತವ್ಯ ಹೊಸ ಎನ್ನುವ ಪಧ ಹಳೆಯ ದಾಗುವಾ ವರೆಗೂ ಕಷ್ಟಾ .ಆಮೇಲೆ ಇಲ್ಲೇ ಇಷ್ಟವಾಗಬಹುದು .ಬಾಸ್ ನನಗೆ ಎಲ್ಲರನ್ನೂ ಪರಿಚಯಿಸಿನನಗೆ ಮಾಡುವ ಕೆಲಸ -ಕೂರುವ ಜಾಗವನ್ನು ತೋರಿಸಿದರು .ಆಫೀಸಿನಲ್ಲಿ ಎಲ್ಲರೂ ತಮ್ಮ ತಮ್ಮ ಕೆಲಸ ಮಾಡುತ್ತಾ ಹೋಗುತ್ತಿದ್ದರು .ಕೆಲಸ ಬೇಗ ಮುಗಿಸಿ ಮಧ್ಯಾಹ್ನ ಹೊತ್ತು ಹರಟೆ ಹೊಡೆಯುತ್ತಿದ್ದರು ಸರ್ಕಾರದ ಕೆಲಸ ಎಂದರೆ ಕೇಳಬೇಕೇ ಕೆಲಸ ಎಷ್ಟರ ಮಟ್ಟಿಗೆ ನಮ್ಮ ಸರ್ಕಾರ ಸೃಷ್ಟಿಸಿರುತ್ತದೆ ಎಂದು .ಸರಿ ನಾನು ಅಷ್ಟೇ ವೇಗದಲ್ಲಿ ಕೆಲಸ ಮುಗಿಸಿ ಎಲ್ಲರ ಪರಿಚಯ ಮಾಡಿಕೊಂಡೆ .ಅಂದಿನ ಹರಟೆ ನನ್ನಂತಹ ಹೊಸಬರಿಗೆ ಬಹಳ ಅನುಕೂಲವಾಯಿತು .ಎಲ್ಲರ ಆತ್ಮೀಯತೆ ಸಿಕ್ಕಿತು ನನಗೆ ಹೆಚ್ಚು ಆತ್ಮೀಯನದವನು ವಿಜಯ್ .ಇಡೀ ಆಫೀಸಿನಲ್ಲಿ ಒಟ್ಟು ೧೫ ಸಹೋದ್ಯೊಗಿಗಳಿದ್ದರು ಅದರಲ್ಲಿ ೫ ಜನ ಮಾತ್ರ ಬ್ಯಾಚೂಲ್ ರ್ ಆಧು ನನ್ನನ್ನು ಸೇರಿಸಿ ಮೂರು ಹುಡುಗರಾದರೆ ಇಬ್ಬರು ಹುಡುಗಿಯರು .ವಿಜಯ್ ಹೆಚ್ಚು ಆತ್ಮೀಯ ನಾಗಿದ್ದು ಅವನು ಬ್ಯಾಚುಲರ್ ಎಂಬ ಕಾರಣಕ್ಕೆ ಇನ್ನೊಬ್ಬ ಬ್ಯಾಚುಲರ್ ಸುರಜ್ ಇವನು ಹೆಚ್ಚು ರೋಡ್ ಱೋಮೀಯೊ ಆಗಿದ್ದ .ಆಫೀಸಿನಲ್ಲಿ ಆಫೀಸ್ ರೋಮಿಯೋ . ಹುಡುಗಿಯರೆಂದರೆ ತನ್ನ ಮಾತಿನ ಮೋಡಿಯಲ್ಲಿ ಅವರನ್ನು ಸೆಳೆದು ಬಿಡುತ್ತಿದ್ದ .ಇವನ ಬಲೆಗೆ ಸಿಕ್ಕಿದ ಹುಡುಗಿಯರು ,ಇವನಿಂದ ತಪ್ಪಿಸಿಕೊಳ್ಳೋ ಅವಕಾಶ ಕಡಿಮೆ .ಹುಡುಗಿಯರೆಂದರೆ ಅಷ್ಟಕ್ಕೇ ಅಷ್ಟೇ ಅಂತ ಬೆಳೆದಿದ್ದ ನನಗಂತೂ ಅವನ ಸ್ನೇಹ ದೂರಾವಾಯಿತು .ವಿಜಯ್ ಹತ್ತಿರ ವಾದ


ನಾನಂತೂ ದಿನ ಪೂರ್ತಿ ವಿಜಯ್ ನ ಜೊತೆಯಲ್ಲೇ ಇರುತ್ತಿದ್ದೆ . ವಿಜಯನ ಸಹಾಯದಿಂದ ಅವರ ಮನೆಯ ಹತ್ತಿರವೇ ನನಗೊಂದು ಮನೆ ಕೊಡಿಸಿ ಕೊಟ್ಟಿದ್ದ. ಸುರಜ್ ನ ನಡವಳಿಕೆಯ ಬಗ್ಗೆ ನಮಗೆಲ್ಲ ಇಷ್ಟವಾದರೂ ಜನರು ನಮ್ಮ ಮೇಲೆ ತಪ್ಪು ಅಬಿಪ್ರಾಯ ವ್ಯಕ್ತ ಪಡಿಸುತ್ತಾರೇನೋ ಎಂಬ ಅಂಚಿಕೆಯಿಂದ ಸಮಾನಾಂತರ ಕಾಯ್ದುಕೊಂಡಿದ್ದೆವು .ಸುರಜ್ ಆ ಇಬ್ಬರು ಹುಡುಗಿಯರು ಬ್ಯಾಜುಲರ್ ಆಗಿದ್ದೆ ಅವರ ಮೇಲೆ ಕಾಳ್ ಎಸಯಲು ಕಾರಣವಾಗಿತ್ತು . ಯಾವುದೇ ಹುಡುಗಿಯನ್ನು ನೋಡಲಿ ,ಸುರಜ್ ಮೊದಲು ನೋಡುತ್ತಿದ್ದಿದ್ದು ಅವರ ಕಾಲನ್ನು , ಕಾಲು ಉಂಗುರವನ್ನು ,ಕಾಲಿನಲ್ಲಿ ಕಾಲು ಉಂಗುರ ಇಲ್ಲದಿದ್ದರೆ ಮಾತ್ರ ತನ್ನ ಬಾಯ್ ವರಸೆ ಶುರು ಮಾಡುತ್ತಿದ್ದ . ಬಂದ ಸಂಬಳವನ್ನೆಲ್ಲ ತನ್ನ ಜೊತೆ ತಿರುಗುವ ಹುಡುಗಿಗೆ ಖರ್ಚು ಮಾಡಿಬಿಡುತ್ತಿದ್ದ .ಸುರಜ್ ನ ತಾಯಿ ಸುಮತಿಗೆ ಗಂಡ ಕಟ್ಟಿಸಿದ ಬಾಡಿಗೆ ಮನೆಗಳು ಇದ್ಡಿದರಿಂದ ಸಂಸಾರದ ಖರ್ಚು -ವೆಚ್ಚವನ್ನೆಲ್ಲ ಆ ದುಡ್ಡೀನಿಂದಲ್ಲೇ ಸರಿದೂಗಿಸಿದ್ದಳು .ತನ್ನ ಮಗನ ಚಾಳಿಯಲ್ಲಾ ಆಕೆಗೆ ಗೊತ್ತು .ಮೊದಲೆಲ್ಲಾ ಈಗೇ ಇರಲಿಲ್ಲ .ಕಾಲೇಜಿನ ಮೆಟ್ಟಿಲು ಹತ್ತಿತ್ತೇ ಬದಲಾಗಿ ಹೋಗಿದ್ದ .ಆಗ ತಾಯಿ ಇದು ಹುಡುಗು ಬುಧ್ಧಿ ಅಂತಾ ಸುಮ್ಮನಾಗಿದ್ದಳು .ಅವನ ಮೇಲೆ ಜನರ ಬಾಯಲ್ಲಿ ,ಹಲವಾರು ಪ್ರಕರಣಗಳು ದಾಖಲಾಗುತ್ತಿದ್ದಂತೆ ಆಕೆ ಜಾಗರೂಕಾಲದಳು. ಅವನಿಗೆ ಒಂದು ಸರ್ಕಾರಿ ಕೆಲಸ ಸಿಕ್ಕಿದ ಮೇಲಂತೂ ತಾಯಿಯ ಕೈಯಿಗೆ ಇವನು ಸಿಗದಾದ . ತನ್ನ ಮಗನನ್ನು ಸರಿ ದಾರಿಗೆ ತರಲು ಆಕೆ ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ .ಅನೇಕ ತಂತ್ರಗಳನ್ನು ಪ್ರಯೋಗಿಸಿದಳು .ಆದರೆ ಅವನು ಸರಿ ದಾರಿಗೆ ಬರುವ ಲಕ್ಷಣ ಗಳು ಗೋಚರಿಸದೇ ಇದ್ದಾಗ ಇನ್ನೂ ಬೇರೆ ದಾರಿಯಿಲ್ಲ ಅಂತಾ ತಿಳಿದು ಸುಮ್ಮನಾದಳು . ಹಾಗಾಗಿ ಅವನಿಗೆ ಹೇಳುವರಿಲ್ಲದೇ , ಕೇಳುವರಿಲ್ಲದೇ ಅವನ ಆಟ ಹೀಗೆಯೇ ಮುಂದುವರೀದಿತ್ತು .ಆಫೀಸಿನ ವಾತಾವರನವನ್ನು ಹಾಳು ಮಾಡುತಾ ಇದ್ದಾನೆಂದು ,ವಯಸ್ಸಾದ ಸಹೋದ್ಯೋಗಿಗಳು ಆರೋಪಿಸಿದಾಗ ಮಾತ್ರ ಅವನು ಸಿಡಿದು ಬೀಳುತ್ತಿದ್ದ ."ನಿಮಗೆಲ್ಲ ನನ್ನ ತರಹ ಬಿಂದಾಸ್ ಆಗಿರಬೇಕಂದು ಆಸೆ ಇದೆ .ಆದರೆ ಒಬ್ಬರಿಗೆ ಹಣದ ಅಭಾವ .ಇನ್ನೊಬ್ಬರು ಹೆಂಡತಿ ಗುಲಾಮ .ಮತ್ತೊಬ್ಬರು ಸಮಾಜಕ್ಕೆ ಹೆದರುತ್ತೀರಾ , ಮಗಾದೊಬ್ಬರಿಗೆ ಭಯ .ಇವೆಲ್ಲವೂ ನನಗೆ ಇಲ್ಲ .ಇರುವಷ್ಟು ದಿನ ಬಿಂದಾಸ್ ಆಗಿ ಸ್ವರ್ಗಕ್ಕೆ ಹೋಗಬೇಕು .'' ಎಂದು ಉತ್ತರ ನೀಡುತ್ತಿದ್ದ. ಒಮೋಮ್ಮೆ ಸಂಸಾರದ ತಾಪತ್ರಾಯಗಳು ತಲೆಯ ಮೇಲೆ ಕುಳಿತಾಗ ಇವನ ತರಹ ಆಗಬೇಕೆಂದು ನಮ್ಮ ಹಿರಿಯ ಸಹೋದ್ಯೋಗಿಗಳು ಅಂದುಕೊಳ್ಳುತ್ತಿದ್ದರು.ಆದರೆ ಯಾರು ಆ ಹೆಣ್ಣುಗಳಿಗೆ ಆಗುವ ಅನ್ಯಾಯದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲ್ಲಿಲ್ಲ .ತಮಗೆ ತಮ್ಮ ಮನೆಗೆ ಸಂಬಂದ ಪಟ್ಟವರಿಗೆ ಏನಾದಾರೂ ಅನಾಹುತ ಆಗುವ ವರೆಗೂ ಅದರ ಗಂಭೀರತೆ ನಮಗೆ ಆಗುವುದೇ ಇಲ್ಲ .ಅದೇ ಘಟನೆ ಬೇರೆಯವರಿಗೆ ನಡೆದರೆ ನಾವು ಅಷ್ಟಾಗಿ ತಲೆ ಕೆಡಿಸಿ ಕೊಳ್ಳುವುದೇ ಇಲ್ಲ.ಹೀಗಾಗಿ ಎಲ್ಲರೂ ಸುರಜನನ್ನೇ ಹೊಗಳುತ್ತಿದ್ದರು. ಹುಡುಗಿಯರು ಅಷ್ಟೇ ,ಇವನ ಬಳಿ ಹೆಚ್ಚು ಸಂತೋಷವಾಗಿರುತ್ತಿದ್ದರು. ಹಿರಿಯರು ಕೆಲವು ಬುಧ್ಧಿವಾದಗಳನ್ನು ಹೇಳುತ್ತಿದ್ದರು. ಆ ಹುಡುಗಿಯರು ಇವರ ಮಾತನ್ನು ಕಿವಿ ಮೇಲೆ ಹಾಕಿ ಕೊಳ್ಳುತ್ತಿರಲಿಲ್ಲ .ಒಂದು ಹೆಣ್ಣು ಒಂದು ಗಂಡು ಹೀಗೆ ಹೀಗೆ ನಗು ನಗುತ್ತಾ ಮಾತಾನಾಡಿದರೆ ಏನು ಹೆಸರು ಕಟ್ಟುತ್ತಾರಪ್ಪ ಅಂತಾ ಆ ಹಿರಿಯರ ಮೇಲೆ ಕೋಪಿಸಿ ಕೊಳ್ಳುತ್ತಿದ್ದರು
ಒಂದು ಸಲ ಬಾಸ್ ಕೂಡ ಆ ಹುಡುಗಿಗೆ ಬುಧ್ಧಿವಾದ ಹೇಳಿದ್ದರು ,ಆದರೂ ಆ ಹುಡುಗಿಯರು ಕೇರ್ ಮಾಡಲಿಲ್ಲ ಅವನ ಜೇಬು ಖಾಲಿ ಮಾಡಿಸಿ ಆರಾಮವಾಗಿ ಸುತ್ತುತ್ತಿದ್ದರು.ಅವರ ಸ್ನೇಹ ಎಷ್ಟು ಬಲವಾಗಿತ್ತೆಂದರೆ ,ಅದರಲ್ಲಿನ ಒಬ್ಬ ಹುಡುಗಿ ಶ್ರುತಿಗೆ ನಿರಂತರ ಮದುವೆ ಒತ್ತಡವಿದ್ದರೋ ಮದುವೆ ನಿರಾಕರಿಸುತ್ತಲೇ ಇದ್ದಳು .ತಂದೆ ತಾಯಿ ,''ನೀನು ಮದುವೆ ಆಗುವುದಿಲ್ಲ ವೆಂದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದರೂ ಆಕೆ ಕೇರ್ ಮಾಡಲಿಲ್ಲ .ಆಕೆಯ ನಿರೀಕ್ಷೆಯಂತೆ ಅವರು ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ .ಇನ್ನೊಬ್ಬ ಹುಡುಗಿ ಭವ್ಯ ,ಆ ಹುಡುಗನ ಜೊತೆ ಚೆಲ್ಲಾಟ ದಿಂದ ಇರಬೇಡ ಅಂತಾ ಮನೆಯಲ್ಲಿ ಅಂದರೂ ಇವನ ಸಹವಾಸ ಬಿಡಲಿಲ್ಲ . ಅವರ ಅಣ್ಣಾ,ಈ ಭವ್ಯಾಳಿಗೆ ಚಿತ್ರಹಿಂಸೆ ಕೊಟ್ಟು ,ರೌಡಿಗಳನ್ನು ಬಿಟ್ಟು ,ಸುರಜ್ ನನ್ನು
ಹೊಡಿಸಿದ .ಆದರೂ ಕೇರ್ ಮಾಡಲಿಲ್ಲ .ಆಗ ಸಹಜವಾಗಿ ಇವರಿಬ್ಬರೂ ಸುರಜ್ ನನ್ನು ಪ್ರೀತಿ ಮಾಡುತ್ತಿದ್ದಾರೆಂದು ನಾವೆಲ್ಲರೂ ಅಂದು ಕೊಂಡೆವು .ಅವರನ್ನು ನೇರವಾಗಿ ಕೇಳಿದಾಗ '' ನಾವು ಪ್ರೀತಿ, ಗೀತಿ ಅಂತ ಯಾವುದು ಮಾಡಿಲ್ಲ .ಇಲ್ಲದ ಬಣ್ಣ ಕಟ್ಟಾ ಬೇಡಿ.ನಾವು ಸ್ನೇಹಿತರು ಎಂದಷ್ಟೇ ಉತ್ತರಿಸುತ್ತಿದ್ದರು .ಆ ಹುಡುಗಿಯರು ಇವರನ್ನು ಇಷ್ಟೊಂದು ಇಷ್ಟಪಟ್ತಿತ್ತು ಮಾತ್ರ ನಿಜವಾಗಲೂ ಆಶ್ಚಯ ವೆನಿಸುತ್ತಿತ್ತು. ಸ್ಯುರಾಜ್ ಒಬ್ಬನೇ ಹಣವನ್ನು ನೀರಿನಂತೆ ಚೆಲ್ಲುತ್ತಿದ್ದ .ಆದರೆ ಹುಡುಗಿಯರು 5 ಪೈಸಾನು ಖರ್ಚು ಮಾಡದೇ ,ತನ್ನ ಮನೆಗೆ ಕೊಟ್ಟು ಬಿಡುತ್ತಿದ್ದರು.ಇದರಿಂದಾಗಿ ನನ್ನಲ್ಲಿ ಅನೇಕ ಅನುಮಾನಗಳು ಹುಟ್ಟಿ ಕೊಂಡವು .ಕೇವಲ ಜಾಲಿಗೋಸ್ಕರ ಸುರಜ್ ನ ಜೊತೆ ಸುತ್ಟುದಿರ ಬಹುದೆಂದು ನನಗೆ ಅನಿಸಿತು.ಆದರೂ ,ಮೋಜುಗೋಸ್ಕರ ಇವರು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರಲ್ಲ ಎಣಿಸಿದಾಗ ನಿಜವಾಗಲೂ ವ್ಯದೆ ಯಾಗುತ್ತಿದ್ದು ಇಂತಹ ವಿಚಿತ್ರ ಹುಡುಗಿಯರು ಸಂಪ್ರದಾಯ ವೆತ್ತ ಈ ಸಮಾಜದಲ್ಲಿ ಇದ್ದಾರಲ್ಲಪ್ಪಾ ಅಂತ ಅನಿಸುತ್ತಿತ್ತು. ಒಮ್ಮೆ ನಾನೇ ಖುದ್ದಾಗಿ ಸುರಜ್ ನನ್ನು ಕೇಳಿದೆ ''ಯಾಕೆ ಹಣವನ್ನು ಹಾಳು ಮಾಡುತ್ತಿಯಾ ಮೇಲಾಗಿ ಆ ಹುಡುಗಿಯರ ಭವಿಷ್ಯವನ್ನು ಹಾಳು ಮಾಡುತ್ತಿಯಾ,ಅವರು ಮದುವೆ ಆಗಿ ತಮ್ಮ ಗಂಡಂದಿರ ಜೊತೆ ಸುಖ ವಾಗಿರಲಿ ಒಬ್ಬರಿಗೆ ಒಳ್ಳೆಯದು ಮಾಡುವುದು ಆಗದೆ ಇದ್ದರು, ಕೆಟ್ಟದು ಮಾಡುವುದು ಬೇಡ . ನಿನ್ನ ವ್ಯ್ ಯಕ್ಟಿಕ ಜೀವನದಲ್ಲಿ ತಲೆ ಹಾಕುವುದು ನನ್ನ ತಪ್ಪು.ಆದರೂ ಇಷ್ಟು ಅನ್ಯಾಯ ನಡೆಯುತ್ತಿದ್ದರೂ ,ಏಕೋ ಮನಸ್ಸು ಸುಮ್ಮನಿರಲಿಲ್ಲ .ಇದೆ ಜಾಗದಲ್ಲಿನಮ್ಮ ಅಕ್ಕ ತಂಗಿ ಇದ್ದಿದ್ದರೆ ಅನ್ನುವ ಭಾವನೆ ಬಂತು.ಅದಕ್ಕಾಗಿ ನಿನಗೆ ಬುಧ್ಧಿವಾದ ಹೇಳುತ್ತಿದ್ದೇನೆ.ದಯವಿಟ್ಟು ತಪ್ಪಾಗಿ ತಿಳಿಯ ಬೇಡ.'' ಮನಸಿನಲ್ಲಿ ಅಡಗಿಧ್ಢ ಪ್ರಶ್ನೆಗೆ ಉತ್ತರ ಸಿಗಬಹುದೆಂದು ನೇರವಾಗಿ ಕೇಳಿಯೇ ಬಿಟ್ಟೆ .ಆದರೆ ಅವನು ಅಷ್ಟೇ ನೇರವಾಗಿ ನಗುತ್ತಾ ''ನಾನು ಬಿಟ್ಟರು ಅವನು ಬಿಡೊಲ್ಲ ಎಂದು ಹೊರಟು ಹೋದ. ಈ ಉತ್ತರ ನನ್ನಲಿ ಮತ್ತಷ್ಟು ಗೊಂದಲ ಉಂಟು ಮಾಡಿತ್ತು.ಅಂದರೆ ಇವರನ್ನು ಯಾರು ಒಬ್ಬನು ನಿಯ೦ತ್ರಿಸುತ್ತಿದ್ದಾನೆ .ಸುರಜ್ ಇವರಿಗೆ ಹೆದರಿಕೂಂಡ್ ಈ ಕೆಲಸ ಮಾಡುತ್ತಿದ್ದಾನೆ ,ಎಂಬುದು ಅವನ ಉತ್ತರದಿಂದ ಅರ್ಥ ವಾಯಿತು.ಅವನ ಹಿಂದೆಯೇ ಒಡಿ ಅವನ ಕೈ ಎಳೆದು ಕೊಂಡು ''ನೀನು ಯಾರಿಗೂ ಹೆದರಬೇಡ ,ನಾನಿದ್ದೇನೆ.ಅವರ ಭವಿಷ್ಯ ಹಾಳು ಮಾಡಬೇಡ . ನನ್ನ ಪ್ರಾಣ ಹೋದರೂ ,ಸರಿ ನಾನು ಅವನನ್ನು ಎದುರಿಸುತ್ತೇನೆ.ದಯವಿಟ್ಟು ನನ್ನ ಮಾತನ್ನು ಗಂಭೀರವಾಗಿ ತೆಗೆದು ಕೋ ,ಅದಕ್ಕೆ ಅವನು ಜೋರಾಗಿ ನಗೆಯ ತೊಡಗಿದ .ಅವನ ನಗು ನನ್ನಲ್ಲಿ ಕೋಪ ಉಕ್ಕಿಸಿತು.ಜೋರಾಗಿ ಅವನ ಕೆನ್ನೆಗೆ ಬೀಸಿದೆ.5 ನಿಮಿಷ ಇಬ್ಬರು ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತಾ ಮಾತನಾಡದೇ ಇದ್ದೆವು .ಆ ಮೌನ ವನ್ನು ಸುರಜೇ ಮುರಿದ .''ನೋಡು ,ಈ ಕಾಲದಲ್ಲಿ ನೀನು ಆ ಹುಡುಗಿಯರ ಮೇಲೆ ಇಟ್ಟಿರುವ ವಿಶ್ವಾಸ ಅಬಿಮಾನ ,ನಿನ್ನ ಅಕ್ಕ ತಂಗಿಯರಂತೆ ಭಾವಿಸಿದ ರೀತಿ ಕಂಡು ನಿಜಕ್ಕೂ ನನಗೆ ಸಂತೋಷವಾಗುತ್ತದೆ.'' ಎಂದು ಹೇಳಿ ಹೊರಟು ಹೋದ.ದಿನ ಕಳೆದಂತೆ ಅವನಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ .ಎಂದು ಯಾರ ಮೇಲೂ ಕೈ ಮಾಡದ ನಾನು, ಅವನ ಮೇಲೆ ಕೈ ಮಾಡಿದ್ದು ದಿನಾ ಕೊರಗುವಂತೆ ಮಾಡಿತ್ತು.
ಆದರೆ ಒಂದು ದಿನ ಅಘಾತಕಾರಿ ಸುದ್ದಿ ಬಂತು.ಸುರಜ್, ಭವ್ಯ , ಶ್ರುತಿ ಮೂವರು ಸತ್ತಿದ್ದಾರೆ ಎಂಬ ಸುದ್ದಿ ತಿಳಿದು ಎಲ್ಲರಿಗೂ ಶಾಕ್ ಆಯಿತು.ನಾವೆಲ್ಲರೂ ಅಲ್ಲಿಗೆ ಹೋದೆವು .ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು.ಎಲ್ಲರೂ ತಮ್ಮವರನ್ನು ಕಳೆದುಕೊಂಡ ಕಿರುಚಾಟ ,ನರಲಾಟ ನೋಡಲಾಗದೇ ನೇರವಾಗಿ ಮನೆಗೆ ಬಂದೆ . ''ತಮಗೆ ಕಾಗದ ಬಂದಿದೆ .ಹೆಸರು -ಊರು ಒಂದು ಬರೆದಿಲ್ಲ .ಎಂದು ಮನೆಯ ಯಜಮಾನ ಕಾಗದ ಕೊಟ್ಟು ಹೊರಟು ಹೋದ.ನಾನು ನಿಧಾನವಾಗಿ ಕಾಗದ ಓದಿದೆ ಆ ಕಾಗದ ಈ ರೀತಿ ಇತ್ತು.
''ಆತ್ಮೀಯ ಅಣ್ಣ ,ನಾವು ಭವ್ಯ ಶ್ರುತಿ....ನೀವು ನಮ್ಮ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ ಸುರಜ್ ನಿಂದ ತಿಳಿಯಿತು.ಯಾವ ಜನ್ಮದ ಅಣ್ಣನು ನೀವು...........ಒಬ್ಬನನ್ನು ಒಡೆಯುವಷ್ಟು ಸಿಟ್ಟನ್ನು ಪಡೆದು ಕೊಂಡಿರಿ ಎಂದರೆ ನಿಮಗೆ ನಮ್ಮ ಬಗ್ಗೆ ಎಷ್ಟು ಕಾಳಜಿ ಇತ್ತು .ಎಂಬ ಅರಿವಾಗುತ್ತದೆ.ಅದಕ್ಕಾಗಿಯೇ ಈ ಕಾಗದ ಬರೆದದ್ದು...........................................................................''ನಲ್ಮೆಯ ಗೆಳೆಯ ನಾನು ಸುರಜ್ ,ನೀನು ಕೇಳಿದ ಪ್ರಶ್ನೆಗಳಿಗೆ ನಾನು ಉತ್ತರಿಸುತ್ತೀನಿನಾನು ಹುಡುಗಿಯ ಜೊತೆ ಮೋಜು ಮಾಡುತ್ತಾ ಕಾಲ ಕಳೆಯುತ್ತಿದ್ದೆ .ಆಗ ಒಂದು ದಿನ ನನಗೆ ತಿಳಿಯಿತು.ನನಗೆ ಬ್ರ್ಯೆನ್ ಟ್ಯೂಮರ್ ಇದೆಯೆಂದು ,ಇನ್ನೂ 6 ತಿಂಗಳಲ್ಲಿ ಸಾಯುತ್ತೇನೆಂದು ,ಆಗ ಇಡೀ ಜಗತ್ತೇ ತಲೆ ಕೆಳಗೆ ಆಗ ಬಾರದ ಅನಿಸಿತು .ಡಾಕ್ಟರ್ ಹೇಳಿದ ಸಮಯಕ್ಕೆ ದಿನಾ ಕಾಟಾಚಾರಕ್ಕೆ ಚಿಕಿತ್ಸೆಗೆ ಹೋಗುತ್ತಿತ್ತಾ ನನಗೆ ಒಂದು ಆಶ್ಚರ್ಯ ಕಾದಿದ್ದು .ಭವ್ಯ ಶ್ರುತಿ ಕೂಡ ಚಿಕಿತ್ಸೆ ಕೋಸ್ಕರ ಬಂದಿದ್ದರು.ಡಾಕ್ಟರ್ ನನ್ನು ವಿಚಾರಿಸಿದಾಗ ಇವರಿಗೂ ಬ್ರ್ಯೆನ್ ಟ್ಯೂಮರ್ ಇದೆಯೆಂದು ಗೊತ್ತಾಯಿತು.ಎಂತಹ ವಿಚಿತ್ರವಲ್ಲವೇ, ನಾನು ನನ್ನ ಗೆಳತಿಯರು ಒಂದೇ ಕಾಯಿಲೆ ಇಂದ ನರಳುವುದು .ನನಗೆ ಊಹಿಸಲಿಕ್ಕೂ ಸಾದ್ಯವಾಗಲಿಲ್ಲ.ಅವರನ್ನು ಕೇಳಿದೆ . ಅವರು ಈ ಕಾಯಿಲೆ ಇದೆ ಎಂದುಒಪ್ಪಿದರು.ನನ್ನ ಕಾಯಿಲೆ ಬಗ್ಗೆಯೂ ಅವರಿಗೆ ವಿವರಿಸಿದೆ. ಅವರು ನಂಬಿಲ್ಲ. ಕ್ರಮೇಣ ನಂಬಿಕೆ ಹುಟ್ಟಿತು.ನಾವು ಅಂತೂ ಸಾಯುತ್ತೇವೆ ಏನಾದರೂ ಒಳ್ಳೇ ಕೆಲಸವನ್ನು ಮಾಡಿ ಸಾಯೋಣಾ ಅನಿಸಿತು .ಮನುಷ್ಯನಿಗೆ ಯಾವಾಗ ಸಾಯುತ್ತೇನೆಂದು ನಮ್ಮ ತರಹ ಗೊತ್ತಾಗಿ ಹೋದರೆ ಪ್ರಪಂಚದಲ್ಲಿ ಯಾರು ಕೆಟ್ಟವರಿರುವುತಿಲ್ಲ.ನಾನು ನನ್ನ ಹಣವನ್ನೆಲ್ಲ ಬಡ ರೋಗಿಗಳು ಬಂದರೆ ಉಚಿತ ಚಿಕಿತ್ಸೆ ಮಾಡುವ ಸಲುವಾಗಿ ಬ್ಯಾಂಕ್ ನಲ್ಲಿ ಇಟ್ಟಿದ್ದೆ ಅದನ್ನು ನಿನ್ನ ಖಾತೆ ಗೆ ವರ್ಗಾಯಿಸಿದ್ದೇನೆ .ನಾನು ವಹಿಸಿರುವ ಕೆಲಸವನ್ನು ನೀನು ಸಂತೋಷವಾಗಿ ಮಾಡುತ್ತಿಯಾ ಎಂಬ ನಂಬಿಕೆ ಮೇಲೆ ನಾವು ಆತ್ಮಹತ್ಯೆ ಮಾಡಿಕೊಂಡಿದ್ದು. ..................ಸಾವು ಯಾವಾಗ ಬರುತೆ ಅಂತಾ ಕಾಯುವುದರಲ್ಲಿನ ಹಿಂಸೆ ಯಾವುದರಲ್ಲೋ ಇಲ್ಲ .ನೀನು ಒಂದು ಮಾತು ಹೇಳಿದೆ . ನೆನಪಿದೆಯಾ....... ''ನೀನು ಯಾರಿಗೂ ಹೆದರಬೇಡ ನಾನಿದ್ದೇನೆ ,ಪ್ರಾಣ ಹೋದರೂ ಸರಿ ನಾನು ಅವನನ್ನು ಎದುರಿಸುತ್ತೇನೆಂದು .......ಅದಕ್ಕೆ ಉತ್ತರ ಕೊಟ್ಟಿದ್ದೇನೆ ನೀನು ನಾವು ವಹಿಸಿದ ಕೆಲಸ ಮಾಡಿ ನಮ್ಮಗಳ ಆತ್ಮಕ್ಕೆ ಶಾಂತಿ ಉತ್ತರವನ್ನು ನೀಡುತ್ತಿಯಾ ಎಂಬ ನಂಬಿಕೆಯಿಂದ ನಾವು ಆತ್ಮಹತ್ಯೆ ಮಾಡಿಕೊಂಡಿದ್ದೀವಿ................................ಇಂತೀ...ನಿಮಗೆ................ಅಳಿದು ಹೋದ ಜೀವಗಳ ಕೊನೆಯ ವಂದನೆ......................................ಶುಭ0............................mr.chanaksha

Random Fun

Moon of the Day

Baby Wild Animal Pictures

Portia De Rossi

NetLingo Word of the Day

Social Networks Links Bookmarks

ಪ್ರಿಯ ಓದುಗರೇ

ನನ್ನ ಈ ಕವನಗಳನ್ನು ಕಥೆಗಳನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಿ

ನನ್ನ ಬ್ಲಾಗ್ ಪಟ್ಟಿ

ನರಸಿಂಹ ಯಾಕೆ ಇಷ್ಟು ಕೋಪ

ನರಸಿಂಹ ಯಾಕೆ ಇಷ್ಟು ಕೋಪ

ಬಸವ ಯಾಕೆ ಕುಳಿತಿರುವೆ

ಬಸವ ಯಾಕೆ  ಕುಳಿತಿರುವೆ

ಹೂವೇ ನೀನು ಯಾರು

ಹೂವೇ ನೀನು ಯಾರು
ನವೀನ್ ಸತೀಶ್

ಗಣೇಶ

ಗಣೇಶ

ಗಣೇಶ

ಗಣೇಶ

ನಲ್ಮೆಯ ಗೆಳೆಯರೇ

<
blockquote>ಅಸ್ಠಿರಂ ಜೀವನ ನೌಕೆ ಅಸ್ಠಿರಂ ಧನ ಯೌವನಂ ಅಸ್ಠಿರಂ ದಾನ ಪುತ್ರಾದಿ ಧರ್ಮ ಕೀರ್ತಿದ್ವಯ ಸ್ಠಿರಂ

ನನ್ನ ಪ್ರಿಯ ಓದುಗರೆ

ನನ್ನ ಈ ಸಣ್ಣ ಕತೆಗಳನ್ನು ಓದಿದ ಮೇಲೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಕಾಮೆಟ್ ಗೆ ಹೋಗಿ ನಿಮ್ಮ ಅನಿಸಿಕೆ ತಿಳಿಸ ಬಹುದು

ನಮ್ಮ ಚಿತ್ರ

Loading...

ನನ್ನ ಬಗ್ಗೆ

ನನ್ನ ಫೋಟೋ
sathish sunil kumar
ಬೆಂಗಳೂರು, ಕರ್ನಾಟಕ, India
nick name:mr.chanaksha ನಾನು ಮತ್ತು ಸುನಿಲ್ ಒಳ್ಳೇ ಸ್ನೇಹಿತರು email:sathish_charya@rediffmail.com
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ